Friday 17 February 2023

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ

ಹರಿದಾಸರ ಆರಾಧ್ಯ ದೈವನಾದ ಶ್ರೀ ಪಾಂಡುರಂಗ ವಿಠಲನ ಮುರುತಿಯ ವರ್ಣಿಸುವ ಶ್ರೀ ಜಗನ್ನಾಥ ದಾಸರ ಅದ್ಭುತವಾದ ಕೃತಿ

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ | ಇಂದುಭಾಗ ನಿವಾಸ ನರನ ಸಾರಥಿಯಾ ॥ ಪ ||

ಪದಾರ್ಥ -
ಇಂದು = ಚಂದ್ರ
ನರ = ಅರ್ಜುನ

ಭಾವಾರ್ಥ -
ಚಂದ್ರಭಾಗ ನದಿಯ ತೀರದಲ್ಲಿ ಇರುವ  ಪಂಢರಾಪುರದಲ್ಲಿ ನಿಂತಿರುವಂತಹ, ಅರ್ಜುನನ ಸಾರಥಿಯಾದ, 
ಆ ಪಾಂಡುರಂಗನ ದಿವ್ಯ ಮುರುತಿಯ ಎಂದು ನೋಡುವೆನು 

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರಾ ।
ತರುಣೀಂದುಚ್ಛವಿ ತಿರಸ್ಕರಿಸೂವ ಪ್ರಖರಾ |
ಕಿರಿಗೆಜ್ಜೆ ಕಡೆಯಾ ನೂಪುರ ಪೆಂಡೆ ಶಫರಾ । 
ತ್ಯೆರ ಜಂಘೆ ಜಾನು ಭಾಸ್ವರ ರತ್ನ ಮುಖರಾ ॥ ೧ ॥

ಪದವಿಂಗಡಣೆ - 
ಅರುಣಾಬ್ಜೋಪಮ = ಅರುಣ + ಅಬ್ಬ + ಉಪಮ
ಚರಣಾಂಗುಲಿ = ಚರಣ + ಅಂಗುಲಿ
ತರುಣೀಂದುಚ್ಛವಿ = ತರುಣ + ಇಂದು + ಉಚ್ಛವಿ
ಕಿರಿಗೆಜ್ಜೆ = ಕಿರಿ + ಗೆಜ್ಜೆ 

ಪದಾರ್ಥ -
ಅರುಣಾಬ್ಜೋಪಮ = ಕೆಂಪು ಕಮಲದಂತೆ ಇರುವ,
ಚಾರು = ಸುಂದರವಾದ, ತರುಣೀಂದುಚ್ಛವಿ = ಬಾಲ ಚಂದ್ರನ / ಈಗಷ್ಟೇ ಉದಯಿಸಿದ ಚಂದ್ರನ ಕಾಂತಿಯನ್ನು,ತ್ಯೆರ = ಮುಸುಕಿನಲ್ಲಿ
ಭಾಸ್ವರ = ಪ್ರಕಾಶಿಸುವ,
ಮುಖರಾ = ಮುಕುರ = ಕನ್ನಡಿ 

ಭಾವಾರ್ಥ - 
ಕೆಂದಾವರೆದಂತಹ ಸುಂದರವಾದ ಚರಣ, ಅಂಗುಲಿ, ನಖರಗಳ್ಳುಳವನೆ,
ಉದಯಿಸಿದ ಚಂದ್ರನ ಕಾಂತಿಯನ್ನೂ ತಿರಸ್ಕರಿಸುವಂತಹ ಪ್ರಖರವಾದ ಕಾಂತಿಯುಳ್ಳವನ,
ಕಾಲಿನಲ್ಲಿ ಮೀನಿನ ಆಕಾರದಂತೆ ಇರುವ ಗೆಜ್ಜೆ, ಕಿರುಗೆಜ್ಜೆ, ಕಡೆಯ, ಪೆಂಡೆಗಳು ಇರುವ ನೂಪುರಗಳು, 
ಮರೆಯಲ್ಲಿ ಇರುವ ತೊಡೆ ಮೊಣಕಾಲುಗಳು, ಸೂರ್ಯನಂತೆ ಕಾಂತಿ, ರತ್ನದಂತೆ ಗಟ್ಟಿ, ಕನ್ನಡಿಯಂತೆ ಮಿಂಚುತ್ತಿರುವವನ 

ರಂಭಾ ಪೋಲುವ ವೂರು ಪೊಂಬಣ್ಣಾಂಬರವಾ |
ಕುಂಭಿ ಮಸ್ತಕದೊಲ್ನಿತಂಬದಿ ಪೊಳವಾ |
ಕಂಬು ಮೇಖಳ ಕಂಜ ಗಂಭೀರನಾಭಿ |
ಅಂಬುಧಿಶಾಯಿ ವಿಧಿ ಶಂಭು ಪೂಜಿತನಾ ॥ ೨ ॥

ಪದವಿಂಗಡಣೆ -
ಪೊಂಬಣ್ಣಾಂಬರವಾ = ಪೊಂಬಣ್ಣ + ಅಂಬರವ
ಮಸ್ತಕದೊಲ್ನಿತಂಬದಿ = ಮಸ್ತಕದೊಲ್ + ನಿತಂಬದಿ
ಅಂಬುಧಿಶಾಯಿ = ಅಂಬುದ್ಧಿ + ಶಾಯಿ 

ಪದಾರ್ಥ -
ರಂಭಾ - ಬಾಳೆಯಗಿಡ, ವೂರು = ಊರು = ತೊಡೆ/ಕಾಲು,
ಪೊಂಬಣ್ಣಾಂಬರವಾ = ಬಂಗಾರ ಬಣ್ಣದ ವಸ್ತ್ರ, ಕುಂಭಿ= ಮಡಿಕೆ, ಮಸ್ತಕ = ತಲೆ, ನಿತಂಬ = ಪೃಷ್ಠ ಭಾಗ, ಕಂಬು = ಶಂಖ, ಮೇಖಳ = ಡಾಬು, ಕಂಜ = ಕಮಲ, ನಾಭಿ = ಹೊಕ್ಕಳು, ಅಂಬುಧಿಶಾಯಿ = ಸಾಗರದಲ್ಲಿ ಮಲಗಿದವ, ವಿಧಿ = ಬ್ರಹ್ಮ ದೇವರು, ಶಂಭು = ರುದ್ರ ದೇವರು

ಭಾವಾರ್ಥ -
ಬಾಳೆಯ ಗಿಡದಂತೆ ಕಾಲುಗಳ್ಳುಳವನ , ಬಂಗಾರ ಬಣ್ಣದ ವಸ್ತ್ರವನ್ನು ಧರಿಸಿದವನ,
ಮಡಿಕೆಯ ಆಕಾರದಂತಿರುವ ಮಸ್ತಕ, ಹೊಳೆಯುತ್ತಿರುವ ಹಿಂಬದಿ,
ಕಮಲದಂತಹ ಗಂಭೀರವಾದ ನಾಭಿಯ ಹತ್ತಿರ ಶಂಖ, ನಾಭಿಯ ಸುತ್ತ ಸುಂದರವಾದ ಡಾಬು .
ಸಮುದ್ರ ದಲ್ಲಿ ಮಲಿಗಿದವ ಅಂದರೇ ಸಾಗರದಲ್ಲಿ ಶಯಿಸುವ, ಬ್ರಹ್ಮನಿಂದ ಹಾಗು ರುದ್ರನಿಂದ ಪೋಜಿತನಾದ ಶ್ರೀಮನ್ನಾರಾಯಣನ

ಲವಕುಕ್ಷಿ ತ್ರಿವಳೀ ಭಾರ್ಗವಿವತ್ಸ ಉದ್ಯ |
ದ್ರವಿ ಪೋಲುವ ಕೌಂಸ್ತುಭ ನವ ವೈಜಯಂತೀ | 
ಸುವಿಶಾಲ ಹೃದಯದೋಳ್ವಿವಿಧಾ ಹಾರಗಳಾ |
ನವನೀತ ಚೋರಾ ಶ್ರೀ ಪವಮಾನಾರ್ಚಿತನಾ || ೩ ||

ಪದವಿಂಗಡಣೆ -
ಲವಕುಕ್ಷಿ = ಲವ + ಕುಕ್ಷಿ
ಭಾರ್ಗವಿವತ್ಸ = ಭಾರ್ಗವಿ  + ವತ್ಸ 
ಉದ್ಯದ್ರವಿ = ಉದಯದ + ರವಿ
ಹೃದಯದೋಳ್ವಿವಿಧಾ = ಹೃದಯದೋಳ್ + ವಿವಿಧ

ಪದಾರ್ಥ -
ಲವಕುಕ್ಷಿ = ಚಿಕ್ಕದಾದ ಕುಕ್ಷಿ = ಚಿಕ್ಕ ಹೊಟ್ಟೆಯ ಭಾಗ,
ತ್ರಿವಳೀ = ಮೂರು ಮಡಿಕೆ ಇರುವ, ಭಾರ್ಗವಿ = ವಜ್ರ,
ವತ್ಸ = ಎದೆ, ಉದ್ಯದ್ರವಿ = ಉದಯಿಸಿದ ಸೂರ್ಯ,
ಪೋಲುವ = ಹೋಲುವ, ಕೌಂಸ್ತುಭ = ಕೌಸ್ತುಭ ಮಣಿ,
ವೈಜಯಂತೀ = ಶ್ರೀ ನಾರಾಯಣನು ಧರಿಸುವ ಒಂದು ಬಗೆಯ ಹಾರ, ಸುವಿಶಾಲ = ಸುಂದರವಾದ ವಿಶಾಲ,
ನವನೀತ = ಬೆಣ್ಣೆ 

ಭಾವಾರ್ಥ -
ಚಿಕ್ಕದಾದ, ಮೂರು ಕಡೆ ಮಡಿಕೆಯ ಹೊಟ್ಟೆಯ ಭಾಗ, ವಜ್ರದಂತೆ ಇರುವ ಎದೆಯೂ, 
ಉದಯಿಸಿದ ಸೂರ್ಯನಂತೆ ಕಂಗೊಳಿಸುವ ಕೌಸ್ತುಭ ಮಣಿ, ನವ ವೈಜಯಂತಿಯ ಮಾಲೆ,
ವಿವಿಧವಾದ ಹಾರಗಳು ಆ ಸು(ಸುಂದರವಾದ)-ವಿಶಾಲವಾದ ಎದೆಯಲ್ಲಿ ಶೋಭಿಸುತ್ತಿರುವವನ,
ಶ್ರೀ ಅಂದರೇ ಲಕ್ಷ್ಮೀ ದೇವಿ ಮತ್ತು ವಾಯುದೇವರು ಅರ್ಚಿಸುವಂತಹ ಬೆಣ್ಣೆಯ ಕಳ್ಳ ಶ್ರೀ ಕೃಷ್ಣನ 

ಪದಕಾ ಸರಗಿಯು ಜಾಂಬೂನದ ಕಂಬು ಕಂಠಾ | 
ರದನೀಕರ ತೆರ ಬಾಹು ಚದುರಾ ಭುಜಕೀರ್ತಿ | 
ಬದರಾ ಸಂಕಾಶಾ ಅಂಗದ ರತ್ನ ಕಟಕಾ | 
ಪದುಮಾರುಣ ಕರವಾ ಮಧ್ಯದಲಿ ಯಿಟ್ಟವನಾ || ೪ ||

ಪದವಿಂಗಡಣೆ -
ಪದುಮಾರುಣ = ಪದುಮ + ಅರುಣ

ಪದಾರ್ಥ -
ಸರಗಿ = ಒಂದು ಹಾರ, ಜಾಂಬೂನದ = ಬಂಗಾರದ,
ಕಂಬು = ಶಂಖ, ರದನೀಕರ = ಆನೆಯ ದಂತ, ತೆರ = ತರಹ,
ಚದುರಾ = ಸುಂದರವಾದ, ಭುಜಕೀರ್ತಿ = ಭುಜಕ್ಕೆ ಧರಿಸುವ ಆಭರಣ, ಬದರ = ಚಂದ್ರ, ಸಂಕಾಶಾ = ಅದರಂತೆ, ಅಂಗದ = ತೋಳಿನಲ್ಲಿ ಧರಿಸುವ  ಒಂದು ಆಭರಣ, ಕಟಕ = ಕಡಗ,
ಪದುಮಾರುಣ = ಕೆಂಪು ಕಮಲ / ಕೆಂದಾವರೆ, ಮಧ್ಯದಲಿ = ಸೊಂಟದಲ್ಲಿ

ಭಾವಾರ್ಥ -
ಶಂಖದಂತೆ ಮೂರು ಗೆರೆಗಳು ಇರುವ ಆ ಕಂಠ, ಅದರಲ್ಲಿ ಬಂಗಾರದ ಹಾರದಲ್ಲಿ ಪದಕವಿದೆ,
ಆನೆಯ ದಂತದಂತೆ ಇರುವ ಬಾಹುಗಳು, ಅದಕೆ ಸುಂದರವಾದ ಭುಜಕೀರ್ತಿ
ಚಂದ್ರನಂತೆ ಪ್ರಕಾಶಿಸುವ ತೋಳುಬಳೆಗಳು, ಕೈಯಲ್ಲಿ ರತ್ನದ ಕಡಗ,
ಕಮಲದಂತೆ ಕೆಂಪಾದ ಕರಗಳನ್ನು ಸೊಂಟದಲ್ಲಿ ಇಟ್ಟವನ

ವಿಧು ಬಿಂಬೋಪಮ ಚಲುವ ವದನ ಕೆಂದುಟಿಯಾ | ಭಿದುರಾಭ ದಶನಾಳಿಂಗದಿರೊಲ್ಕಿರಿ ನಗಿಯಾ |
ಕದಪು ಕನ್ನಡಿ ನಾಸಾ ತುದಿ ಚಂಪಕ ತೆನಿಯಾ | ಉದಕೇಜಾಯತ ನೇತ್ರ ಯದು ವಂಶೋದ್ಭವನಾ || ೫ ||

ಪದವಿಂಗಡಣೆ -
ಭಿದುರಾಭ = ಭಿದುರ /ಬಿದುರ /ಬದರ + ಆಭ
ದಶನಾಳಿಂಗದಿರೊಲ್ಕಿರಿ = ದಶನ + ಆಳಿಂಗದಿ/ ಆಲಿಂಗದಿ + ರೊಲ್ + ಕಿರಿ
ಉದಕೇಜಾಯತ = ಉದಕೇ + ಜಾಯತ

ಪದಾರ್ಥ -
ವಿಧು = ಚಂದ್ರ, ಬಿಂಬೋಪಮ = ಬಿಂಬ ದಂತೆ / ಅದರಂತೆ,
ವದನ = ಮುಖ, ಭಿದುರಾಭ = ಚದುರಿದಂತೆ / ಚಂದ್ರನಂತೆ, ದಶನ = ಹಲ್ಲುಗಳು, ಕಿರಿನಗೆ = ಕಿರುನಗೆ, ಕದಪು = ಕನ್ನಡಿ,
ನಾಸ = ಮೂಗು, ಉದಕೇಜಾಯತ = ಕಮಲ

ಭಾವಾರ್ಥ -
ಚಂದ್ರನಂತೆ ಪ್ರಕಾಶಿಸುವ ಚೆಲುವಾದ ಮುಖ, ಅದರಲ್ಲಿ ಕೆಂಪಾದ ತುಟಿ,
ಆ ತುಟಿಗಳ ಕಿರುನಗೆಯ ಆಲಿಂಗನದಲ್ಲಿ ಇರುವ ಚಂದ್ರನಂತೆ ಕಾಂತಿಯುಳ್ಳ ಹಲ್ಲುಗಳು,
ಕನ್ನಡಿಯಂತೆ ಸ್ವಚ್ಛವಾಗಿ ಹೊಳೆಯುವ ಕೆನ್ನೆ, ಸಂಪಿಗೆಯ ತೆನೆಯಂತೆ ಸುಂದವಾಗಿ ಇರುವ ಮೂಗಿನ ತುದಿ,
ಕಮಲದಂತೆ ಇರುವ ಕಣ್ಣುಗಳ್ಳುಲವನ, ಯದುವಂಶದಲ್ಲಿ ಜನಿಸಿದವ ಶ್ರೀ ಕೃಷ್ಣನ

ಕಲಿತಾ ಕುಂಡಲ ಕರ್ಣ ಸುಲತಾ ಭ್ರೂಯುಗಳಾ | 
ಲಲಿತಾ ಬಾಲ ಶಶಾಂಕಾ ತಿಲಕಾಂಕಿತ ಫಾಲಾ | ಅಳಿಜಾಲಾವೆನಿಪಾ ಕುಂತಳ ರತ್ನಚಕಿತಾ | 
ಕಲಧೌತಾ ಮುಕುಟಾ ದಿಗ್ವಿಲಯಾ ಬೆಳಗುವದಾ ॥ ೬॥

ಪದವಿಂಗಡಣೆ -
ಭ್ರೂಯುಗಳಾ = ಭ್ರೂ + ಯುಗಳ
ಅಳಿಜಾಲಾ = ಅಳಿ + ಜಾಲ

ಪದಾರ್ಥ -
ಕಲಿತಾ = ಕೂಡಿದ, ಕುಂಡಲ = ಕಿವಿಯ ಆಭರಣ,
ಸುಲತಾ = ಸುಂದರವಾದ ಲತೆ, ಭ್ರೂಯುಗಳಾ = ಎರಡು ಹುಬ್ಬುಗಳು, ಲಲಿತಾ = ಸುಂದರವಾದ, ಫಾಲಾ = ಹಣೆ,
ಅಳಿಜಾಲಾವೆನಿಪಾ = ಭೃಂಗದ ಗುಂಪಿನನಂತೆ, ಕುಂತಳ = ಕೂದಲು, ಚಕಿತಾ = ವಿಸ್ಮಯವಾದ, ಕಲಧೌತಾ = ಬಂಗಾರ,
ದಿಗ್ವಿಲಯಾ = ಬ್ರಹ್ಮಾಂಡ

ಭಾವಾರ್ಥ -
ಕಿವಿಗಳಿಗೆ ಕೂಡಿದ ಕುಂಡಲ , ಸುಂದರವಾದ ಲತೆಗಳಂತೆ ಹುಬ್ಬುಗಳು,
ಉದಯಿಸಿದ ಚಂದ್ರನಂತೆ ಸುಂದರವಾಗಿ ಪ್ರಕಾಶಮಾನವಾದ ತಿಲಕವು ಹಣೆಯಮೇಲೆ,
ಭೃಂಗದ ಗುಂಪಿನನಂತೆ ದಟ್ಟವಾಗಿ ಇರುವ, ರತ್ನದಂತೆ ವಿಸ್ಮಯವಾಗಿ ಹೊಳೆಯುವ ಗುಂಗುರು ಕೂದಲು,
ಯಾರ ಚಿನ್ನದ ಮುಕುಟವು ಇಡಿಯ ಬ್ರಹ್ಮಾಂಡವನ್ನೇ ಬೆಳಗುವುದೋ

ಶಠ ಕೂರ್ಮರೂಪಿಯಾ ಕಿಟಿ ಮಾನವಹರಿಯಾ ।
ವಟು ಭಾರ್ಗವ ಕಾಕುಸ್ಥ ಶಕಟ ಕಂಸ ದ್ವಿಷಿಯಾ | ನಿಟಿಲಾಂಬಕ ಸಹಯಾ ಖಳ ಕಟಕಾರಿ ಭೀಮಾ |
ತಟಶಾಯೀ ಜಗನ್ನಾಥವಿಠಲನಾ ಕೃತಿಯಾ || ೭ ||

ಪದವಿಂಗಡಣೆ -
ಮಾನವಹರಿಯಾ = ಮಾನವ + ಹರಿ
ಕಟಕಾರಿ = ಕಟಕಾ + ಅರಿ 
ಜಗನ್ನಾಥವಿಠಲನಾ ಕೃತಿಯಾ = ಜಗನ್ನಾಥವಿಠಲನ + ಆಕೃತಿ

ಪದಾರ್ಥ -
ಶಠ = ಚತುರ, ಕಿಟಿ = ವರಾಹ, ಮಾನವಹರಿ = ನರಹರಿ,
ಕಾಕುಸ್ಥ =  ಇಕ್ಷ್ವಾಕು ವಂಶದಲ್ಲಿ ಜನಿಸಿದವ = ಅವನ ವಂಶದಲ್ಲಿ ಜನಿಸಿದ ಶ್ರೀ ರಾಮಚಂದ್ರ,
ದ್ವಿಷಿಯಾ = ದ್ವೇಷಿಯ, ನಿಟಿಲಾಂಬಕ = ಹಣೆಯಲ್ಲಿ
 ಕಣ್ಣುಳ್ಳವ = ರುದ್ರದೇವರು, ಖಳ = ದುಷ್ಟ,
ಕಟಕಾರಿ = ಸೈನೆಯ ವೈರಿ, ಆಕೃತಿ  = ಆಕಾರ

ಭಾವಾರ್ಥ -
ಚತುರತನದಿಂದ ವೇದವ ರಕ್ಷಿಸಿದ ಮತ್ಸ್ಯರೂಪನ , ಕೂರ್ಮರೂಪನ, ವರಾಹರೂಪನ, ನರಹರಿರೂಪನ,
ವಾಮನರೂಪನ, ಪರಶುರಾಮ ರೂಪನ, ರಾಮಚಂದ್ರನ, ಶಕಟಾಸುರ, ಕಂಸನ ವೈರಿಯಾದ ಕೃಷ್ಣನ,
ರುದ್ರದೇವರ ಸಹಾಯಕನಾದ ಅಂದರೇ ಮೋಹಶಾಸ್ತ್ರ ಭೋದಿಸಿದ ಬೌದ್ಧರೂಪಿಯ, ದುಷ್ಟರ ಸೈನ್ಯಯ ವೈರಿಯಾದ ಕಲ್ಕಿ ರೂಪನ,
ಭೀಮಾ ನದಿಯ ತಟದಲ್ಲಿ ನೆಲೆಸಿರುವ ಜಗನ್ನಾಥ ವಿಠಲನ, ಪಾಂಡುರಂಗ ಮೂರುತಿಯ

             ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Thursday 2 April 2020

ರಾಮ ಹಾಗು ಕೃಷ್ಣಾ....

ಎಲ್ಲಾ ದಾಸರು ಸಂತರು ರಾಮಕೃಷ್ಣರನ್ನು ಮುಕ್ತ ಕಂಠದಿಂದ ಹಾಡಿ ಭಕ್ತಿ ಮಾರ್ಗದಲ್ಲಿ ಕುಣಿಯುತ್ತಾ ನಲಿಯುತ್ತಾ,  ಮುಕುತಿಗೆ ತುಂಬಾ ಸರಳವಾದ ಮಂತ್ರವನ್ನು ಹಾಡಿ ಹೇಳಿದಾರೆ.
ಕೃಷ್ಣಾ ಎಂದರೆ ತನ್ನ ಲೋಕವನ್ನೇ ಕೊಡುವನು ಎಂದು ವ್ಯಾಸರಾಜರು ಹೇಳಿದ್ದಾರೆ. 
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆಯು ಅನ್ನೋ ಪುರಂದರ ದಾಸರ ಪದ್ಯವೂ ಉಂಟು.
 
ರಾಮಾವತಾರ ಹಾಗು ಕೃಷ್ಣಾವತಾರ ನಮ್ಮ ಕಲಿಯುಗಕ್ಕೆ ತುಂಬಾ ಹತ್ತಿರವಾಗಿ ಆಗಿಹೋದ ಅವತಾರಗಳು.
ಹೀಗಾಗಿಯೇ ರಾಮ ಕೃಷ್ಣರು ನಮಗೆ ತುಂಬಾ ಬೇಗ ಸಿಗುತ್ತಾರೆ ಅನ್ನೋ ನಂಬಿಕೆ ಹಾಗು ಸತ್ಯವು ಕೂಡಾ ಹೌದು.
ರಾಮಾವತಾರ  ಮತ್ತು ಕೃಷ್ಣಾವತಾರದ ಅಂತರ ಹಾಗು ಸಾಮ್ಯವನ್ನು ರಾಯಚೂರು  ಜಿಲ್ಲೆಯ ಕಸಬಾ ಲಿಂಗಸೂಗೂರ ಗ್ರಾಮದ ವರದೇಂದ್ರ ತೀರ್ಥರ ಸಾನಿಧ್ಯದಲ್ಲಿ ವರದೇಶ ದಾಸರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. 
ಅವರ "ರಾಮ ಹರೇ ರಾಮ ಹರೇ, ಕೃಷ್ಣ ಹರೇ ಕೃಷ್ಣ ಹರೇ" ಅನ್ನೋ ಪದ್ಯ ಇವೆರೆಡು ಅವತಾರದ ದೃಷ್ಟಾಂತವನ್ನು ತುಂಬಾ ಸರಳವಾಗಿ ವಿವರಿಸಿದೆ. 
ಒಂದೆರಡು ನುಡಿಯನ್ನು ಇಲ್ಲಿ ಬರಿಯುತ್ತೆನೆ.

ಹರಧನುಭಂಗಿಸಿ ಹರುಷದಿಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕೃಷ್ಣ ಹರೇ...

ರಾಮ ತನ್ನ ಮದುವೆಗೋಸ್ಕರ ಮಿಥಿಲಾ ರಾಜ್ಯಕ್ಕೆ ಹೋಗಿ ಅಲ್ಲಿದ ಸ್ವಯಂವರದಲ್ಲಿ ಭಾಗವಹಿಸಿ, ಹರ ಧನುಷನ್ನು ಲೀಲಾಜಾಲವಾಗಿ ಮುರಿದು ಸೀತಾ ಮಾತೆಯನ್ನು ಮದುವೆ ಆಗುತ್ತಾನೆ,  ಆದರೇ ಅದೇ ಕೃಷ್ಣಾವತಾರದಲ್ಲಿ ಸುಮ್ಮನೆ ಒಂದು ಬಿನ್ನಹ ಪತ್ರವನ್ನು ನೋಡಿ, ಅಣ್ಣನ ಸೆರೆ ಇಂದ ಬಿಡಿಸಿಕೊಂಡು ಬಂದು ಏನು ನಡೆದಿಲ್ಲವೇನೋ ಅನ್ನೋ ತರಹ ರುಕ್ಮಿಣಿಯನ್ನು ಮದುವೆಯಾಗುತ್ತಾನೆ. 

ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ -
ವನು ಪಾಲಿಪ ಶ್ರೀ ಕೃಷ್ಣ ಹರೇ...

ತಂದೆಯ ಮಾತನ್ನು ಕೇಳಿ ಮಡದಿ ಹಾಗು ತಮ್ಮನನ್ನು ಕರೆದುಕೊಂಡು ವನವಾಸಕ್ಕೆ ರಾಮ ಹೋದರೆ, ಇಲ್ಲಿ ಕೃಷ್ಣ ತನ್ನ ಇಡೀ ಬಾಲ್ಯವನ್ನೇ ತನ್ನ ಗೊಲ್ಲ ಗೆಳೆಯರ ಜೊತೆಗೆ ಗೋಗಳ ಕಾಯುತ ವನದಲ್ಲೇ ಇರುತ್ತಾನೆ. 
ರಾಜ್ಯ ಭೋಗವನ್ನು ಬಿಟ್ಟು ರಾಮ ವನವಾಸಕ್ಕೆ ಹೋದರೆ ಕೃಷ್ಣಾ ವನದಲ್ಲೇ ಇದ್ದು ಮುಂದೆ ರಾಜನಾಗುತ್ತಾನೆ. 

ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ -
ಪರನ ಕಾಯ್ದ ಶ್ರೀ ಕೃಷ್ಣ ಹರೇ...

ಲಂಕೆಗೆ ಹೋಗುವುದಕ್ಕೆ ದಾರಿ ಬಿಡು ಎಂದು ಸಮುದ್ರರಾಜನನ್ನು ಕೇಳಿಕೊಳುತಾನೆ, ಸಮುದ್ರರಾಜ ಸ್ಪಂದಿಸದ ಕಾರಣಕ್ಕೆ ಇಡೀ ಸಮುದ್ರವನ್ಮೇ ಗುಡ್ಡಗಳಿಂದ ಬಂಧಿಸುತ್ತಾನೆ ಆದರೇ ಕೃಷ್ಣಾವತಾರದಲ್ಲಿ ಮಗು ಒಂದು ಚೆಂಡು ಹೇಗೆ ಏತತ್ತೋ ಹಾಗೇ ಗೋವರ್ಧನ ಗಿರಿಯನ್ನು ತನ್ನ ಕಿರಿಬೆರಳಿಂದ ಎತ್ತಿ ಎಲ್ಲಾ ತನ್ನ ಊರನ್ನೇ ರಕ್ಷಿಸುತ್ತಾನೆ. 

ಖಂಡಿಸಿದಶಶಿರ ಚಂಡಾಡಿದ ಕೋ -
ದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿಸಿದ ಕೃಷ್ಣ ಹರೇ...

ರಾವಣನ ದಶಶಿರವನ್ನು ತನ್ನ ಕೋದಂಡದಿಂದ ತುಂಡರಸಿ ಸಂಹರಿಸಿದರೆ, ಇಲ್ಲಿ ಕೃಷ್ಣ ತಾನು ಸ್ವತಃ ಏನು ಮಾಡದೆ ಪಾಂಡವರಿಂದ ಮಾಡಿಸಿ ಎಲ್ಲಾ ದುಷ್ಟ ಕೌರವರನ್ನ ಪಾಂಡವರಿಂದಾನೆ ಕೊಲ್ಲಿಸುತ್ತಾನೆ. 

ಭರತ ಪೇಳೆಲರಸತ್ವವ ಸ್ವೀ -
ಕರಿಸಿದತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮಕೃಪಾಕರ ಕೃಷ್ಣ ಹರೇ...

ಭರತ ರಾಮನನ್ನು ಭಿನಹಿಸಿದಂತೆಯೇ ವನವಾಸ ಮುಗಿಸಿ ಬಂದ ಮೇಲೆ ರಾಜ್ಯ ಪಟ್ಟದಲ್ಲಿ ಕೂರುತ್ತಾನೆ, ದ್ವಾಪರದಲ್ಲಿ ತನಗೇನು ಬೇಡ ಅನೋತರಹ ಬರೇ ಪಾಂಡವರನ್ನೇ ಮೆರೆಸುತ್ತಾನೆ. 

ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಜಯ ಕೃಷ್ಣ ಹರೇ...
ಶಬರಿ ಇದ್ದ ಜಾಗಕ್ಕೆ ತಾನೇ ಹೋಗಿ ಅವಳು ಕೊಟ್ಟ ಹಣ್ಣನ್ನು ತಿನ್ನುತಾನೆ, ಇಲ್ಲಿ ಕೃಷ್ಣ ಇಡೀ ಕೌರವರ ಆವ್ಹಾನವನ್ನೇ ತಿರಸ್ಕರಿಸಿ ವಿದುರನ ಮನೆಗೆ ಹೋಗಿ ಅವನ ಔತಣ ಸ್ವೀಕರಿಸುತ್ತಾನೆ.

ಯಾವುದೇ ಅವತಾರ ವಾಗಲಿ ಅವನ ಭಕುತರ ಅಡಿ  ಇರುವ ಕಾರುಣ್ಯ ಅಪಾರವಾದದ್ದು,  ಹಾಗು ಸಾಮಾನ್ಯವಾದದ್ದು. 
ಕೆಲವು ಸಾಮ್ಯ ತೋರಿಸುವ ಪದಗಳು.. 

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲುವಕ್ರಾಗಿದ್ದ ಬಲೆಯ ಕ್ಷಣದಲಿ
ಚಲುವೆಯ ಮಾಡಿದ ಕೃಷ್ಣ ಹರೇ...

ಅಹಲ್ಯೆಯನ್ನು ತನ್ನ ಪಾದದ ಸ್ಪರ್ಶದಿಂದೇ ಶಿಲೆಯಯಿಂದ ಚೆಲುವೆ ಮಾಡುತ್ತಾನೆ, ಅದೇ ಇಲ್ಲಿ ವಕ್ರವಾಗಿದ್ದ ಹೆಣ್ಣನ್ನು ಕ್ಷಣದಲ್ಲೇ ಚೆಲುವೆ ಮಾಡುತ್ತಾನೆ. 

ರಾಮ ರಾಮ ಯಂದು  ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ -
ದೇಶವಿಠಲ ಶ್ರೀ ಕೃಷ್ಣ ಹರೇ...

ರಾಮ ರಾಮ ಎಂದು ನಿತ್ಯದಿ ಭಜಿಪರಿಗೆ ಬೇಡಿದ ವರಗಳನ್ನು ಕೊಡುವ ರಾಮನೇ ನಿನಗೆ ನಮೋ, 
ಕೃಷ್ಣಾ ಕೃಷ್ಣಾ ಎಂದರೆ ಭಕ್ತರ ಸಕಲ ಅಭೀಷ್ಟೆಗಳನ್ನು ಪೂರ್ಣ ಮಾಡುವ ಕೃಷ್ಣಾ ನಿನಗೆ ನಮೋ ಎಂದು  ವರದೇಶ ದಾಸರು ತಮ್ಮ ಈ ಅಮೂಲ್ಯವಾದ ಕೃತಿಯಲ್ಲಿ ಹಾಡಿ ಹೋಗಿಳಿದಾರೆ. 

Sunday 29 December 2019

ನಮ್ಮ ಗುರುಗಳು.....

ಶ್ರೀವಿದ್ಯಾಮಾನ್ಯ ತೀರ್ಥರು ತಯಾರಿಸಿದ ಶಿಷ್ಯರೆಲ್ಲರೂ ಮಾಧ್ವ ಸಮಾಜದ ಗಜಗಳು, ಅದರಲ್ಲಿ ಪೇಜಾವರರು ಗಜೇಂದ್ರರೇ ಸರಿ. ಸಮಾಜಕ್ಕೆ ಹಾಗು ಶಾಸ್ತ್ರಕ್ಕೆ ಇರುವ ಸಮಾನವನ್ನು ತೋರಿಸಿಕೊಟ್ಟು ಇವೆರಡಕ್ಕೂ ದುಡಿದ ಅಪ್ರತಿಮರು.
"ಜನ ಸೇವೆಯೇ ಜನಾರ್ಧನನಿಗೆ ಕೊಡುವ ಟ್ಯಾಕ್ಸ್" ಎಂದು ಯಾವಾಗಲು ಹೇಳುತ್ತಿದ್ದರು. 
ತುಂಬಾ ಜನಕ್ಕೆ ಗೊತ್ತಿಲ್ಲ, ನಮ್ಮ ನಾಡ ಗೀತೆಯಲ್ಲಿ ಆಚಾರ್ಯ ಮಧ್ವರ ಹೆಸರು ಇದ್ದಿದಿಲ್ಲ, ಪೇಜಾವರರೇ ಸ್ವತಃ ಆಗಿನ ಸರ್ಕಾರದ ಜೊತೆಗೆ ವಾದಮಾಡಿ ಮಧ್ವಾಚಾರ್ಯರ ಹೆಸರು ಸೇರಿಸಿದ್ದು. 
ಅವರ ಮಿಂಚಿನಂತೆ ಇದ್ದ ಸಂಚಾರ, ಆ ತೇಜಸ್ಸು, ಆ ವರ್ಚಸ್ಸು,  ಆ ಪ್ರಖರ ನಡೆಗಳು, ಆ ನೇರ ಮಾತುಗಳು,  ಎಷ್ಟೇ ವಿರೋಧಗಳು ಇದ್ದರು ಅವರ ನಿಲುವೇ ಕೊನೇಯದ್ದು. 
ಅಬ್ಬಾ! ನಮ್ಮ ಗುರುಗಳು ಏನಿದಿಲ್ಲ ಹೇಳಿ? 
ಅವರ ರಾಮ ಜನ್ಮ ಭೂಮಿ ಚಳುವಳಿಗೆ ರಾಮನೇ ಪ್ರೀತಿಯಿಂದ ಮರಳಿ ಬಂದಿರಬಹುದು. 
ಅವರು ಸ್ಥಾಪಿಸಿದ ಪೂರ್ಣಪ್ರಜ್ನ್ಯ ವಿದ್ಯಾಪೀಠ ಅದೆಷ್ಟು ವಿದ್ವಾಂಸರನ್ನ ಹುಟ್ಟಿಸಿದೆಯೋ. 
ಮಧ್ವ ಮಂಡಲವನ್ನು ಸ್ಥಾಪಿಸಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯವಿತ್ತು ತಮ್ಮ ಜೀವನ ತುಂಬಾ ವಿದ್ಯಾ ದಾನವನ್ನು ಮಾಡಿದ್ದಾರೆ. 

ನಾವು ಶ್ರೀವಾದಿರಾಜರ, ಶ್ರೀವ್ಯಾಸರಾಜರಂತಹ ಯತಿಗಳ ಸಾಮಾಜಿಕ ಕಳಕಳಿಯ ಬಗ್ಗೆ ಓದಿದ್ದು ಕೇಳಿದ್ದು ಅಷ್ಟೇ, ಆದರೇ ಅದು ಪೇಜಾವರರ ಮುಖಾಂತರ ನೋಡಿದ್ದೀವಿ. 
ಶೂದ್ರರು ಮೇಳು ಕೀಳು ಅಂತೆಲ್ಲ ನೋಡದೆ ಅವರ ಮನೆಗೆ ಪಾದ ಪೂಜೆಗೆ ಹೋದವರು. 
ಇನ್ನೂ ತುಂಬಾ ಜನಕ್ಕೆ ಗೊತ್ತಿಲ್ಲದ ವಿಷಯ ಅಂದರೆ, ಉಮಾ ಭಾರತಿಯವರಿಗೆ ಸನ್ಯಾಸ ದೀಕ್ಷೆ ಕೊಟ್ಟವರು ಪೇಜಾವರರೇ. 

ಅವರ ಆ ವಯಸ್ಸಿನಲ್ಲೂ ಪ್ರತಿ ಏಕಾದಶಿಯ ಭಜನೆ ಮತ್ತು ಹರಿವಾಣ ಸೇವೆ ಇಂದಿಗೂ ಅದ್ಭುತವೇ ಸರಿ. 
ಮಠದ ಶಿಷ್ಯನಾಗಿದ್ದ ನನ್ನನು ಮತದ ಶಿಷ್ಯನಾಗಿ ಮಾಡಿದ ನನ್ನ ಗುರುಗಳು. 
ನನ್ನಲ್ಲಿ ಎಲ್ಲಾ ವಿಚಾರಗಳ, ಅದು ಧಾರ್ಮಿಕವಾಗಿದ್ದೆ ಇರಲಿ ಸಾಮಾಜಿಕವಾಗಿದ್ದೆ ಇರಲಿ, ಕಾಣದೆ ಸ್ಪೂರ್ಥಿಯಾಗಿದ್ದ ನನ್ನ ಗುರುಗಳು.
ಅವರ ಪ್ರಭಾವ ಎಷ್ಟು ಇತ್ತೆಂದರೆ ಉಡುಪಿ ಅಂದ ಕೂಡಲೇ ನೆನಪಾಗುತಿದದ್ದು ಶ್ರೀಕೃಷ್ಣ, ಹಾಗು ಪೇಜಾವರರು. 
ವ್ಯಾಸರಾಜರು ಹ್ಯಾಗೆ ತಿರುಪತಿಯ ವೆಂಕಟರಮಣ್ಣನ ಪೂಜಿಸಿದ್ದರೋ ಅದೇ ರೀತಿ ನನ್ನ ಗುರುಗಳು ಅಯೋಧ್ಯೆಯ ರಾಮನನ್ನು ಪೂಜಿಸಬೇಕಿತ್ತು ಅನ್ನುವ ಆಸೆ ಇತ್ತು. 
ಅವರ ಮುಗ್ಧ ನಗು, ಆ ಬೆಟ್ಟದ ಪಾಂಡಿತ್ಯ ಎಲವೂ ಇವತ್ತು ಬರಿಯ ನೆನಪು. 
ನಾನೇನು ಅವರ ಮಠದ ಶಿಷ್ಯನಲ್ಲ,
ಅವರ ಬಳಿ ವೇದಶಾಸ್ತ್ರ ಕಲಿತ ಶಿಷ್ಯನೂ ಅಲ್ಲಾ, 
ಗೊತ್ತೋ ಗೊತ್ತಿಲದೋ ಅವರ ಗರಡಿಯಲ್ಲಿ ಓದಿ ಬೆಳೆದ ಮಧ್ವ ಮಂಡಲದ ವಿಧ್ಯಾರ್ಥಿನು ಅಲ್ಲಾ, 
ಅವರ ಸಾಮಾಜಿಕ ಕಳಕಳಿಗೆ ಮನಸೋತ ಅವರ ಅನುಯಾಯಿನೂ ಅಲ್ಲಾ. 
ಅವರು ಎಂದಿಗೂ ನನಗೆ "ಸಾಮ್ರಾಟರು".
ಇಂದಿನ ಕಾಲದ ಯತಿಚಕ್ರವರ್ತಿಯು ಹೌದು, ನನ್ನ ಗುರುಗಳು! ನಮ್ಮ ಗುರುಗಳು!!
ನನ್ನ ಗುರುಗಳಿಗೆ ನಾನು ಬರೆದ ಈ ಪುಟ್ಟ ಲೇಖನವನ್ನು ಸಮರ್ಪಿಸುತ್ತೇನೆ. 
ಶ್ರೀ ಕೃಷ್ಣಾರ್ಪಣಮಸ್ತು.
                                    -ವಿಶ್ವಸಂತ ವಿಶ್ವೇಶತೀರ್ಥರ ಭಕ್ತ 
                                          ಅನಿರುದ್ಧ ಪದಕಿ 


Wednesday 4 December 2019

ದಾಸರು ಮತ್ತು ಕವಿಗಳು

ದಾಸ ಸಾಹಿತ್ಯ ಅನೋದು ಬರೇ ಸಾಮಾಜಿಕ ಪರಿವರ್ತನೆಗಾಗಿ ಮೂಡಿ ಬಂದ ಚಳುವಳಿ ಅಲ್ಲಾ. 
ಹಾಗೆ ಬರೇ ಅಧ್ಯಾತ್ಮಕ್ಕಾಗಿ ಬಂದ ಮಡಿ ವಸ್ತುವು ಅಲ್ಲಾ. 
ದಾಸ ಸಾಹಿತ್ಯ ಅನ್ನೋದು ಆ "ವೀರ" ಮಧ್ವ ಯತಿಯ ಸಿಧಾಂತವನ್ನು ಜನರ ಮನೆ ಮನೆಗೆ ತಲುಪಿಸಿವಂತಹ ಮಾಧ್ಯಮ. 
ಇಲ್ಲಿ ಸಾಮಾಜಿಕ ಕಳಕಳಿಯೂ ಉಂಟು ಹಾಗು ಆ ಸರ್ವೋತ್ತಮನ  ಒಲಿಸಿಕೊಳ್ಳೋ ಮಾರ್ಗವು ಉಂಟು. 
ಬರಿಯುವ ಪಾಂಡಿತ್ಯವಿದೆ ಎಂದು ದಾಸರು ಬರದದಲ್ಲ. 
ಕನಕ ದಾಸರ ಒಂದು ಪದ ನೆನಪಾಗುತ್ತೆ 
ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು||
ಈಗಿನ ರಸಋಷಿಗಳು, ವಿಶ್ವಮಾನವರು, ವಾರಕವಿಗಳು, ಗಾರುಡಿಗರು  ಥರ, ಸುಖಾ ಸುಮ್ಮನೆ ಅಂಕಿತವನಿಟ್ಟುಕೊಂಡು ಬರೆದವರಲ್ಲ.
ಆಶ್ಚರ್ಯವೇನೆಂದರೆ ದಾಸರ ಯಾವತ್ತು ಪೆನ್ನು ಮತ್ತು ಪುಸ್ತಕ ಹಿಡಿದು ಕೂತು ಇವತ್ತು ನಾನು ಈ ಪದ್ಯ ಬರದೇ ತೀರಬೇಕು ಅಂತಾ ಸರ್ವಥಾ ಬರೆದವರಲ್ಲ. 
ಅವರ ಮನದಿಂದ ನೇರ ಸ್ಪುಟವಾದ ಭಕ್ತಿಯ ನುಡಿ ಮುತ್ತುಗಳು ಇವು.
ರವಿ ಕಾಣದು ಕವಿ ಕಾಣುತ್ತಾನೆ ಅಂತ ಮಾತಿದೆ.
ಆದರೆ ಕವಿ ದೇವರನ್ನು ಕಂಡಿದಾನೋ? 
ಕನಕ ದಾಸರ ಪದ್ಯಕ್ಕೆ ಪೂರಕವಾಗಿ ಪ್ರಸನ್ನ ವೆಂಕಟದಾಸರ ಪದ್ಯವು ಇದೆ
ಹಲವು ಕವಿಗಳಿಗೆ ನಿಲುಕದ  ಆನೆ
ಬಲ ಪ್ರಸನ್ವೆಂಕಟನಿಲಯನೆಂಬಾನೆ||
ಇಲ್ಲಿ ಆನೆ ಎಂದರೆ ಪರಮಾತ್ಮ. 
ಕವಿಗಳಿಗೂ ಮತ್ತು ದಾಸರಿಗೂ ತುಂಬಾ ವ್ಯತ್ಯಾಸ ಇದೆ. 
ಕವಿ ಕಾಣದ ವಸ್ತುವನ್ನು,  ಶಬ್ದಗಳ ಮೂಲಕ ಅಲಂಕರಿಸಿ ಬರೆದರೆ, ದಾಸರು ಕಂಡ್ದಿದನ್ನೇ 'ಅಲಂಕರಿಸದೆ' ಬರೆದವರು. 
ದಾಸರೇನು ಛಂದಸ್ಸು ಮತ್ತು ವ್ಯಾಕರಣಗಳನ್ನು  ಧ್ಯಾನದೊಳ್ಳಗಿಟ್ಟು ಅದನ್ನು ತಪ್ಪದ ಹಾಗೆ, ರಾಗ ಶ್ರುತಿಗಳ ತಾಳ ಮೇಳಗಳ ಪರಿವಿಡಿಯಲ್ಲಿ ಬರೆದವರಲ್ಲ. 
ದಾಸರು ಬರೆದದ್ದೇ ವ್ಯಾಕರಣ ಹಾಡಿದ್ದೇ ರಾಗ ಅನುಸರಿಸಿದ್ದೇ ವ್ಯಾಕರಣ. 
ಇಂದಿಗೂ ಪದಗಳನ್ನು ನೋಡಿದರೆ ಆಶ್ಚರ್ಯವಾಗುವಂತಹ ವ್ಯಾಕರಣ ಅದರಲ್ಲಿದೆ. 
ಷಟ್ಪದಿಯ ಛಂದಸ್ಸಿನಲ್ಲಿ ಬಂದ ಹರಿಭಕ್ತಿಸಾರ ಮತ್ತು ಹರಿಕಥಾಮೃತಸಾರಕ್ಕೆ  ಮಿಕ್ಕಾವ ಪದ್ಯಗಳು ಸಮಾನ ಹೇಳಿ  ನೋಡೋಣ?
ಹೌದು,  ಈ ದಾಸರನ್ನ ಹೇಗೆ ಗುರಿತಿಸೋದು? 
ಅದಕ್ಕೂ ನಮ್ಮ ವಿಜಯದಾಸರು ಮಾರ್ಗ ತೋರಿಸಿದ್ದಾರೆ 
ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು ||ಪ||
ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು||

ದಾಸ ಸಾಹಿತ್ಯ ಬರೇ ಸಾಹಿತ್ಯ ಆಗದಿರಲಿ ನಮ್ಮ ಜೀವನದಲ್ಲಿ ಅದರ ಇಂಪನ್ನು ಹರಿಡಿಸಿ ಅದರ ತತ್ವವನ್ನು ತಿಳಿಯೋಣ. 



Sunday 21 April 2019

In a Hindu's view


Namaskara🙏
Before I start my point, i want to make you clear that I am NOT  that good in English.
Devotee in English and Bhaktha in Kannada,hindi,Tamil, Telugu and in every Indic languages have totally different meanings.
You can call a loyal enthusiastic person a devotee but not a Bhakth.
Bhaktha comes from a word Bhakthi.
Bhakthi is the beautiful relation between God and his seeker.
God can never be far from a Bhaktha!
Bhaktha kumbara, Bhaktha Prahalada, Bhaktha siriyala etc..
Did you heard those names?!
Bhaktha is a religiously, spiritually greater than us.
Now the point is,
Every Modi fan is called as Bhakth, I don't know why?!
Is Modi a god? Are we worshipping him?
We all should stop this BS immediately.
When you call me as a Modi's Bhakth, you are not hurting my political views, but you are hurting my religious views.
This word Bhaktha is going to be used for nonsene things sooner.
Even Karma!
Kayakave kailasa!
And you people call it bitch?
Karma is not a Bitch, you are Bitch!
Know the meaning of karma before you use it.
Eega next point:
Cow!
When that Jaish e Mohammed guy said infront of whole word that,
Tum gaay ke pishaab peene waalon se kuch nai hota!
Did you think that was a matter between two countries??
Hell No!
He was totally pointing out on Hindus!
But we people are like nobody can harm our dharma instead RSS and all are defaming us!
I'll tell you a thing, emailven Afghanistan was Hindu country called as Gaandhar!
Now where are our people???
Only in India!
We hindus refer cow as GO MATA!
We can't be so cowards that some random guy comes and puts a bomb on our army mens on the very same reason which we(sorry for generalising) all think as a mother.
Unfortunately we have gone to the low.
Dharma is in danger? No no no!
These RSS guys I tell you 🤦

Saturday 31 March 2018

'Rallies' An Unwanted celebration

If to be a perfect critic of my society ...then I say rallies should be banned.
Those people who all are there in rallies,
75% of them won't go to temples.
75% I am saying. And they'll be enjoying the hard music instead of worshiping.
Go to temples do Anna daana sevas and daasohas. Blood donation camps is also preferable.... planting a tree is awesome indeed, helping a poor is great.
With a rock music and song feeling proud for a day of some deity is waste..
Do some great things and feel proud for rest of your life..
It may be of any religion, think of it, act wise.
Imagine how it will be if all the youths from a certain society involves themselves in good work.?
I know it's hard, but it'll be the best.

Sunday 26 March 2017

Mahabharat in Science's view

Mahabharata, the very origin of knowledge. Shishupala a unusual character who died not of the sake of Yudha but by his own mistakes. And Krishna...no need of introduction...:-)
Shishupala was born with three eyes and four arms, he was not like demon but he was a human demon.
He knew that his death was by Krishna and was warned that until his 100 sins he will be pardoned and as he does the 101th sin , the very next moment he will be dead.
Here sins may be of anything like murder, lie etc...
Have you observed when you are angry on someone and u are unable to show that anger on them, then suddenly u will cry or eyes become red, u become nervous , anxiety etc
not showing the single anger will make u this much. Even a lie can bring so much of harm to the body. 
In same way as shishupala was not a normal human being as he was born with unusual body, medically his chances of survival was less. As he attempted the 101th sin, that is when he insults the lord and he shows his anger upon him his body starts to deform, or may be his BP may have become high which caused heart attack...;-)
But mythologically he was killed by Krishna's Sudarshana Chakra.
This could be....couldddddd be, another way of seeing this incident.